ನವರಾತ್ರಿ :- ಶ್ರೀದುರ್ಗಾಪರಮೇಶ್ವರಿ ಅಮ್ಮನವರಿಗೆ ದಿನಾಂಕ 01-10-2016 ರಿಂದ 11-10-2016 ರವರೆಗೆ ನವರಾತ್ರಿಯ ಪ್ರಯುಕ್ತ ವಿಶೇಷಪೂಜೆ, ಚಂಡಿಕಾ ಸಪ್ತಶತಿ ಪಾರಾಯಣ ಸಂಜೆ ಮಹಾರಂಗಪೂಜೆ ನಡೆಯಲಿದೆ. ದಿನಾಂಕ 03-10-2016 ರಂದು ‘ದುರ್ಗಾಹೋಮ’ ಮತ್ತು 07-10-2016ರಂದು ರಾಘವೇಂದ್ರ ಹಂದೆಯವರಿಂದ ಚಂಡಿಕಾ ಹೋಮ ಜರುಗಲಿದೆ.
ಅಕ್ಷರಾಭ್ಯಾಸ :- ವಿದ್ಯಾರಂಭ ಪ್ರಾರಂಭಿಸುವ ಪುಟ್ಟ ಮಕ್ಕಳಿಗೆ ದಿನಾಂಕ 11-10-2016ರ ವಿಜಯ ದಶಮಿಯ ಬೆಳಗ್ಗೆ 8-00ಕ್ಕೆ ಸಾಮೂಹಿಕ ಅಕ್ಷರಾಭ್ಯಾಸವನ್ನು ಏರ್ಪಡಿಸಲಾಗಿದೆ. ಆಸಕ್ತರು ದಿನಾಂಕ 10-10-2016 ರ ಸಂಜೆ ಒಳಗೆ ಶ್ರೀದೇವಳದ ಸೇವಾಕಛೇರಿ ಅಥವಾ ದೂ.ನಂ. 9449545714 ಕರೆ ಮಾಡಿ ನೊಂದಾಯಿಸಬಹುದಾಗಿದೆ.
ಕದಿರು ಹಬ್ಬ ಮತ್ತು ದುರ್ಗಾಹೋಮ :- ದಿನಾಂಕ 02-10-2016 ರಂದು ಬೆಳಗ್ಗೆ ಶ್ರೀದೇವಳದಲ್ಲಿ ಭತ್ತದ ತೆನೆಗಳನ್ನು ತಂದು ಶಾಸ್ತ್ರೋಕ್ತವಾಗಿ ಪೂಜಿಸಿ ಕದಿರುಗಳನ್ನು ಶ್ರೀದೇವರಿಗೆ ಸಮರ್ಪಿಸಲಾಯಿತು ನಂತರ ನೆರೆದಿದ್ದ ಭಕ್ತರು ಪ್ರಸಾದ ರೂಪವಾಗಿ ಕದಿರುಗಳನ್ನು ಪಡೆದರು
ಇಂದು ಶ್ರೀದೇವಳದವತಿಯಿಂದ ಸಹಸ್ರ ಸಂಖ್ಯೆಯಲ್ಲಿ “ದುರ್ಗಾಹೋಮ” ವನ್ನು ಮಾಡಲಾಯಿತು. ಶ್ರೀದೇವಳದ ತಂತ್ರಿಗಳಾದ ವೇ.ಮೂ. ಕ್ರಷ್ಣ ಸೋಮಯಾಜಿ ಮತ್ತು ವೇ. ಮೂ. ಹರಿಕ್ರಷ್ಣ ಸೋಮಾಯಜಿ ಹಾಗೂ ಸಹ ವೈದಿಕರ ಪೌರಹಿತ್ಯದಲ್ಲಿ, ಆಡಳಿತ ಮಂಡಳಿಯ ಧರ್ಮದರ್ಶಿಗಳಾದ ಶ್ರೀ ವೈ ಸದಾರಾಮ ಹೇರ್ಳೆ ಮತ್ತು ದಂಪತಿಗಳ ಯಜಮಾನತ್ವದಲ್ಲಿ ‘ದುರ್ಗಾಹೋಮ’ವನ್ನು ಸಂಪನ್ನಗೊಳಿಸಲಾಯಿತು. ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀ ಕೆ. ಅನಂತಪದ್ಮನಾಭ ಐತಾಳ, ಕೋಶಾಧಿಕಾರಿ ಶ್ರೀ ಪ್ರಸನ್ನ ತುಂಗ, ಸದಸ್ಯರಾದ ಶ್ರೀ ಎಂ.ಕೆ. ಅಶೋಕ ಕುಮಾರ ಹೊಳ್ಳ, ಕೂಟ ಮಹಾಜಗತ್ತು ಸಾಲಿಗ್ರಾಮ(ರಿ) ವಿವಿಧ ಅಂಗಸಂಸ್ಥೆಯ ಸದಸ್ಯರುಗಳು, ಭಕ್ತಾದಿಗಳು ಮತ್ತು ಊರ ಸಮಸ್ತರು ಉಪಸ್ಥಿತರಿದ್ದು ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
2 Comments
M.Ravitej Madhyastha
Beautiful decoration for Maa Durga. May her blessings be there for all of us.
guru.narasimha.temple
thank you