ಇದೇ ಅಗಸ್ಟ್ 24ರಂದು ಶ್ರೀಕ್ರಷ್ಣ ಜನ್ಮಾಷ್ಠಮಿಯ ಪ್ರಯುಕ್ತ ರಾತ್ರಿ ಶ್ರೀನರಸಿಂಹ ದೇವರು ಮತ್ತು ಶ್ರೀ ಗೋಪಾಲಕ್ರಷ್ಣ ದೇವರಿಗೆ ವಿಶೇಷ ಪೂಜೆ, ಪಂಚಭಕ್ಷ ಪರಮಾನ್ನ ನೈವೆಧ್ಯವನ್ನು ಮಾಡಲಾಯಿತು. ದಿನಾಂಕ 25ರಂದು ಸಂಜೆ ಪಲ್ಲಕಿ ಉತ್ಸವ ಮೆರವಣಿಗೆಯ ಮೂಲಕ ಎಡಬೆಟ್ಟು ಶ್ರೀಗೋಪಾಲಕ್ರಷ್ಣ ದೇವಸ್ಥಾನಕ್ಕೆ ಹೋಗಿ ಅಲ್ಲಿಯ ಗ್ರಾಮಸ್ಥರಿಂದ ಸಕಲ ಸೇವೆಗಳನ್ನು ಸ್ವೀಕರಿಸಿ ಅಷ್ಟಾವಧಾನ ಸೇವೆ ಸಲ್ಲಿಸಿ, ಶ್ರೀಗೋಪಾಲಕ್ರಷ್ಣ ದೇವರಿಗೆ ಮಹಾಪೂಜೆಗಳನ್ನು ಪೂರೈಸಿಕೊಂಡು ಶ್ರೀಆಂಜನೇಯ ದೇವಳಕ್ಕೆ ಬರಲಾಯಿತು ಅಲ್ಲಿ ಮಹಾಪೂಜೆ ಅಷ್ಟಾವಧಾನ ಸೇವೆಯನ್ನು ಪೂರೈಸಿಕೊಂಡು ಶ್ರೀದೇವಳಕ್ಕೆ ಮರುಳಲಾಯಿತು.
ಶ್ರೀಕ್ರಷ್ಣ ಜನ್ಮಾಷ್ಠಮಿ ಪ್ರಯುಕ್ತ ಶ್ರೀಗೋಪಾಲಕ್ರಷ್ಣ ದೇವರಿಗೆ ಶ್ರೀಗುರುನರಸಿಂಹ ದೇವಳದಲ್ಲಿ ಮಹಾಪಂಚಮ್ರತಾಭಿಷೇಕ ಮತ್ತು ವಿಶೇಷ ಪೂಜೆ ಈ ಒಂದು ದಿನ ಶ್ರೀಗೋಪಾಲಕ್ರಷ್ಣ ದೇವರಿಗೆ ವಿಶೇಷ ಪೂಜೆಯನ್ನು ಮಾಡಲಾಗುತ್ತದೆ
ಎಡಬೆಟ್ಟು ಶ್ರೀಗೋಪಾಲಕ್ರಷ್ಣ ದೇವಸ್ಥಾನ :- ಸಾಲಿಗ್ರಾಮದಿಂದ ಉಡುಪಿ ಹೋಗುವ ಎನ್ಎಚ್ 66 ನಲ್ಲಿ 1.5 ಕಿ.ಮೀ. ಚಲಿಸಿ ನಂತರ ಎಡಭಾಗದಲ್ಲಿರುವ ಒಳರಸ್ತೆಯಲ್ಲಿ ಸ್ವಲ್ಪ ದೂರ ಚಲಿಸಿಬೇಕು, ಈ ವಿಟ್ಲಪಿಂಡಿ ಉತ್ಸವಕ್ಕೆ ಮಾತ್ರ ಹಿಂದಿನ ಕಾಲದಿಂದಲೂ ಶ್ರೀಗುರುನರಸಿಂಹ ದೇವರು ಪಲ್ಲಕ್ಕಿ ಮೇಲೆ ಬರುತ್ತಿರುವುದು ಒಂದು ಕಾರಣಿಕವಾಗಿದೆ. ಹಾಗೂ ಶ್ರೀದೇವಳದ ದಕ್ಷಿಣ ಮಾರ್ಗದಲ್ಲಿ ಈ ಒಂದು ದಿನ ಮಾತ್ರ ಶ್ರೀದೇವರು ಬರುವುದು ಒಂದು ವಿಶೇಷವಾಗಿದೆ
ಎಡಬೆಟ್ಟು ಶ್ರೀಗೋಪಾಲಕ್ರಷ್ಣ ದೇವಸ್ಥಾನ
![ಶ್ರೀಗೋಪಾಲಕ್ರಷ್ಣ ದೇವರು](https://i0.wp.com/srigurunarasimhatemple.com/wp-content/uploads/2016/09/14034714_1215775505110759_4099663157188464270_n.jpg?resize=225%2C300)
ಶ್ರೀಗೋಪಾಲಕ್ರಷ್ಣ ದೇವರು : ಈ ದಿನದಂದು ಶೆಟ್ಟಿಕೆರೆ ಶ್ರೀಧರ ಹೊಳ್ಳರ ಕೊಡುಗೆಯಲ್ಲಿ ಶ್ರೀಗೋಪಾಲಕ್ರಷ್ಣ ದೇವರಿಗೆ ನೂತನ ಬೆಳ್ಳಿಯ ಕವಚವನ್ನು ಸಮರ್ಪಿಸಿರುತ್ತಾರೆ
![ಪಲ್ಲಕ್ಕಿ ಉತ್ಸವ ಮೆರವಣಿಗೆ](https://i0.wp.com/srigurunarasimhatemple.com/wp-content/uploads/2016/09/14021734_1215797681775208_730153245153680249_n.jpg?resize=300%2C225)
ಪಲ್ಲಕ್ಕಿ ಉತ್ಸವ ಮೆರವಣಿಗೆ : ದಾರಿಯಲ್ಲಿ ಮೊಸರು ಕುಡಿಕೆಗಳನ್ನು ಒಡೆಯುತ್ತಾ, ಭಕ್ತಾದಿಗಳು ಸಲ್ಲಿಸಿದ ಆರತಿ ಮತ್ತು ಪೂಜೆಯನ್ನು ಸ್ವೀಕರಿಸುತ್ತಾ ಮೆರವಣಿಗೆ ಸಾಗುತ್ತದೆ